10/11/07

ಬಗ್ಗವ ಬಗ್ಗು ಬಡಿದುದ್ದು!!!

"ಅವ್ವಾ, ಅವ್ವಾ...ಸ್ವಾಮೇರು ಹುಲಿ ಎಡವಿದಾರಂತ" ಅರೆ ಮುಚ್ಚಿದ ಮುಂಬಾಗಿಲ ಬಡಿಯುತ್ತ ಹೆದರಿದ ದನಿಯಲ್ಲಿ
ರಂಗ ಕೂಗುತಿದ್ದ. ಮನೆಗೆಲಸ ಮುಗಿಸಿ ಕಸಮುಸುರೆ ಒರಸಿ , ಮನೆದೇವರು ಮಲ್ಲಿಕಾರ್ಜುನ ನಿಗೆ ದೀಪ ಹಚ್ಚಿ
ತಲೆ ಬಾಗಿ ನಿಂತ ತಲೆ ಮೇಲೆ ಸೂರೇ ಕಳಚಿಬಿದ್ದ ಅನುಭವ. "ಕಾಪಾಡಪ್ಪ ಮಲ್ಲಯ್ಯ" ಎನ್ನುತ್ತಾ ಅವಸರವಸರವಾಗಿ
ಹೊರಬಂದು " ಎಲ್ಲಂತೆ, ಯಾವಾಗ" ಎಂದೆ.
"ಕೂರ್ಲಿ ಕಾನೊಳಗoತೆ ಅವ್ವ, ದನಕಾಯೋ ರಾಮಣ್ಣ ಹೇಳ್ದ"
"ಅವ್ನು ಅಲ್ಲಿಗೆ ಹೋಗಿದ್ನ ?"
"ಹಾ...., ಅವ್ನು ದನ ಹೊಡ್ಕೊಂಡ್ ಬರ್ತಾ ಇದ್ನಂತೆ, ಅವ ಹೇಳಿದ್ರು ಕೇಳ್ದೆ ,ಸ್ವಾಮೇರು ಕೂರ್ಲಿ ಕಾನೊಳಗ ಹೋದ್ರಂತೆ.
ಸ್ವಲ್ಪ ಹೊತ್ತನಲ್ಲೇ ಹುಲಿ ಗರ್ಜಿಸಿದ್ದು ಅವ್ನಿಗೆ ಕೇಳ್ಸ್ ತಂತೆ"
ತದಮಾಡದೆ ಬಾಗಿಲು ಜಡಿದು ಗಟನೆಯ ಜಾಡು ಹಿಡಿಯಲು ಕಾಡಿಗೆ ಹೊರಟುನಿಂತೆ. ಮನೆಯ ಜ0ತಿಗೆ ಕಟ್ಟಿದ್ದ ಲಾಟೀನನ್ನು
ದೊಣ್ಣೆಗೆ ಸಿಗಿಸಿ ಭುಜದಮೇಲೆ ಏರಿಸಿಕೊಂಡು ರಂಗನೂ ತಯಾರಾದ. ಪಡುವಣ ದಿಕ್ಕಲಿ ಕಮಣಿ ಕಣ್ಣು ಮುಚ್ಚುವ ಸಮಯ.
ದಿನವೆಲ್ಲ ಮೇದು ಮನೆಗೆ ಹಿಂತಿರುಗುತಿದ್ದ ದನಕರುಗಳು ಗೊಧೊಳಿ ಎಬ್ಬಿಸಿದ್ದವು. ಕೂರ್ಲಿ ಕಾನು ಸುಮಾರು ನಾಲ್ಕು ಮೈಲಿ
ದಾರಿ , ಅದಕ್ಕಿದ್ದ ಕಾಡಿನ ಕಿಕ್ಕಿರಿದ ದುರ್ಗಮ ಮಾರ್ಗ, ಭಯಾನಕ ವಾಗಿ ಬೆಳೆದುನಿಂತ ಕಾನು, ಗೂಡಿಗೆ ತಿರುಗಿದ್ದ ಬಾನಾಡಿಗಳ
ಉಲಿತ, ಜೇಂಕರಿಸಲು ಶುರುವಿಕ್ಕಿದ ಕೀಟ ,ಮನದಲ್ಲಿದ್ದ ದುಗುಡವನ್ನು ಇಮ್ಮಡಿ ಗೊಳಿಸಿದ್ದವು.
"ಹೇಳಿದ್ರೆ ಕೇಳಲ್ಲ ಸ್ವಾಮೇರು, ಮೊನ್ನೆನೇ ಹೇಳೇನಿ ಹುಲಿ ಕಂಡೂದ್ವು ಅಂತ ನಂಗೆ ಬಯ್ದುದ್ರು 'ನಂಕಿಂತ ದೊಡ್ಡ ಹುಲಿ ಎನ್ಲೆ ಅದು' ಅಂತ"
ದೊಣ್ಣೆಯನ್ನು ಎಡಭುಜದಮೇಲೆ ಇಟ್ಟುಕೊಳ್ಳುತ್ತಾ ರಂಗ ಮಾತು ಮುಂದುವರೆಸಿದ್ದ " ನೋಡ ಅವ್ವಾ , ನೀನಾರು ಸ್ವಲ್ಪ ಹೆಳ್ ಬಾರ್ದೇ
ಅವ್ರಿಗೆ, ಚಕ್ಕಡಿ ಅಲ್ಲೇ ಹೊಡ್ಕಂಡ್ ಬರ್ಬೇಕು ಅನ್ನೋದಾದ್ರೂ ಎನಿತ್ತು? ತನಗುಂದದ ಕಾನೊಳಗೆ ಬಂದಿದ್ರೆ ಇದೆಲ್ಲ ಆಗ್ತಾನೇ ಇರ್ಲಿಲ್ಲ".
ನಡೆದಿರಬಹುದಾದ ದುರ್ಗಟನೆ ಬಗ್ಗೆ ಇದ್ದ ಚಿಂತೆಇಂದ ಅವನ ಮಾತಿಗೆ ಉತ್ತರಿಸದಾದೆ. ಎರಡು ಮೈಲಿ ನಡೆಯುವಷ್ಟರಲ್ಲಿ ಸುತ್ತಲೆಲ್ಲ ಕತ್ತಲಾವರಿಸಿ
ರಂಗ ಹಿಡಿದಿದ್ದ ಲಾಟೀನು ದಾರಿ ದೀಪವಾಗಿತ್ತು. ಅಕಸ್ಮಾತ್ ಬರಬಹುದಾದ ಕಾಡು ಪ್ರಾಣಿಗಳಿಗೆ ಹೆದರಿಸಲು ಕೂಗುತ್ತಾ ರಂಗ ಮುನ್ನೆಡೆದಿದ್ದ.
ಸುಮಾರು ಆರ್ದ ಮೈಲಿ ಸಾಗುವಷ್ಟರಲ್ಲಿ ದೂರದಲ್ಲೆಲ್ಲೋ ಎತ್ತಿನ ಗೆಜ್ಜೆಯ ನಾದ. " ಆವ್ವಾ, ನಮ್ಮೆತ್ತಿನ ಗೆಜ್ಜಿ ಅದು, ಸ್ವಾಮೇರು ಇಲ್ಲೇ
ಎಲ್ಲೋ ಬರ್ತಾ ಅವ್ರೆ" ಹರ್ಷದಿಂದ ರಂಗ ಹೇಳಿದ. ತೀಕ್ಷಣವಾಗಿ ಕೆಳಿಸುತ್ತಿದ್ದ ಗೆಜ್ಜೆಯ ನಾದ ಜೋರಾಗಿ ಕೇಳಹತ್ತಿತು.
ಅದೇ ಮಾರ್ಗವಾಗಿ ಬರುತ್ತಿದ್ದ ಅವರು ರಂಗನ ಕೂಗು ಕೇಳಿ "ಲೇ ಯಾರೋ ಅದು ..?" ಎಂದರು.
"ಸಾಮಿ , ನಾನ್ ರಂಗ, ಆ ದನಕಾಯೋ ರಾಮಣ್ಣ ನೀವು ಹುಲಿ ಎಡ್‍ವೀರಿ ಅಂತ ಊರ್ತೂಂಬಾ ಹಬ್ಸಾನೆ, ಅದ್ಕೆ ನಾನು ಅವ್ವ ಬಂದ್ವಿ"
" ತೋ , ಹುಚ್ಛ್ ಸೂಳೆಮಗ, ಅವ ಹೇಳಿದ್ ಹುಲಿರಾಯನ್ ನೋಡ್ ಬಾ ಹೆಂಗ್ ಮಲ್ ಗ್ಯಾನೆ ಚಕ್ಕಡಿಯಾಗ"
" ಆಆಆಆಆಆ..... .ಅದೇ ಹುಲಿನಾ....??, " ಕಕ್ಕಾಬಿಕ್ಕಿಯಾದ ರಂಗ ಚಕ್ಕಡಿ ಹತ್ರ ಹೋದ.
"ಲೇ ನೀನ್ಯಾಕೆ , ಬಂದೆ, ನಿಂಗಾದ್ರೂ ಗೊತ್ತಾಗಲ್ವಾ ರಂಗ, ಅವಲ್‌ನ್ಯಾಕೆ ಕರ್ಕೊಂಡ್ ಬಂದೆ ಈ ಕಾನೊಳಗ"
"ಇಲ್ಲ ಯಜಮಾನ್ರೆ, ಅವ್ರೆ ಬರ್ತೀನಿ ಅಂತ ಬಂದ್ರು, ನಾ ಹೇಳಿದ್ರ ಕೆಳ್ಲಿಲ್ಲ" ಎನ್ನುತ್ತಾ ತನ್ನಲ್ಲಿದ್ದ ಲಾತೀನು ಬೆಳಕಲ್ಲಿ ಚಕ್ಕಡಿ ಚಕ್ಕಡಿಯಳಗಿದ್ದ
ದೈತ್ಯ ಗಾತ್ರದ ಆ ವ್ಯಾಘ್ರವನ್ನು ನೋಡಿ ಮೂಕವಿಸ್ಮಿತನಾಗಿ ಹೋದ.
ಚಕ್ಕಡಿಯ ಒಂದು ಕಡೆಇಂದ ಇನ್ನೋದು ಕಡೆವರೆಗೂ ನೀಳವಾಗಿ ಮಲಗಿದ್ದ ಆ ಪ್ರಾಣಿ, ಉಸಿರಿಲ್ಲದಿದ್ದರು ಹೆದರಿಸುವಂತಿತ್ತು.
ಪತಿಯ ಬಗ್ಗನ ಬೇಟೆ ಹೆಮ್ಮೆ ತಂದಿತ್ತು, ಆದರೂ ನಡೆಯಬಹುದಾಗಿದ್ದ ದುರ್ಗಟನೆ ಮನದ ಮೂಲೆಯಲ್ಲಿ
ಕುಕ್ಖುತ್ತಿತ್ತು. ಬಾಯ್ತೆರೆದು ಕಣ್ಬಿರಿದು ವಿಶಾಲವಾಗಿ ಮಲಗಿದ್ದ ಹುಲಿಯ ಹತ್ತಿರ ಹೋಗಲು ದೈರ್ಯ ಸಾಲಲಿಲ್ಲ.
"ನಿಮ್ಗೆನಾದ್ರು ಬುದ್ಡಿ-ಗಿದ್ದಿ ಐತಾ.., ಆ ಕಾನಾಗ ಹುಲಿ ಆದವು ಅಂತ ಗೊತ್ತಿದ್ರು ಅಲ್ಯಾಕೆ ಹೊದ್ರಿ..?ಏನಾದ್ರೂ
ಹೆಚ್ಚು ಕಮ್ಮಿ ಆಗಿದ್ರೆ ಗತಿ ಏನು..?"ಎನ್ನಲು " ಲೇ ಹುಚ್ಚಿ, ಈ ನನ್ನ ಗೆಳೆಯ ಇರೋವಾರ್ಗೂ ನಂಗೆನು ಚಿಂತಿಲ್ಲ"
ಚಕ್ಕಡಿಯ ಒಂದು ಬದಿಗಿದ್ದ ಬಂದೂಕಿನೆಡೆ ಕೈ ತೋರಿಸಿ ಮಾತುಮುಂದುವರೆಸಿದ ಪತಿರಾಯ " ನಡಿ, ಹತ್ತು
ಚಕ್ಕಡಿನ, ಹೊತ್ತಾತು ಹೋಗನ" ಎಂದ. ಕಷ್ಟಪಟ್ಟು ಚಕ್ಕಡಿ ಏರಿ ಇದ್ದ ಸ್ವಲ್ಪ ಜಾಗದಲ್ಲಿ ಕುಳಿತೆ. ಹುಲಿಯ ಆ
ಜಿಡ್ಡು ವಾಸನೆ ಹೇಸಿಗೆ ಮೂಡಿಸಿತ್ತು. ಅದೇ ವಾಸನೆಗೆ ಎತ್ತುಗಳು ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಪತಿರಾಯ ಚಕ್ಕಡಿ
ಮುನ್ನಡೆಸಿದ.ಚಕ್ಕಡಿಯ ಕಂಬಿಯಲ್ಲಿ ಕುಳಿತಿದ್ದ ರಂಗ ಕೈಲಿದ್ದ ದೊಣ್ಣೆ ಇಂದ ಮಲಗಿದ್ದ ಮೃಗವನ್ನು ಹೊರಳಾಡಿಸಿ
ಅದರ ಅಂಗಾಗ ನೋಡುತ್ತಾ "ಇದೆಲ್ಲ, ಹೆಂಗಾತು , ಏನೇನಾತು" ಎಂದ."ನೊಡ್ಲೇ, ನಾನು ತನಗುಂದದ ಕಾನೊಳಗೇ ಬರ್ಬೇಕು ಅನ್ಕೊನ್ಡಿದ್ದೆ , ಹೊತ್ತು ಮೀರಿ ಹೋತು.
ಅದಕ ಕೂರ್ಲಿ ಕಾನೊಳಗ ಬಂದೆ. ಎಲ್ಲಾನೂ ಸರಿನೇ ಇತ್ತು. ಆ ಗೌಡ್ರ ಗದ್ಡಿಹತ್ರ ಇರೋ ತೊರೆ
ದಾಟವರ್ಗೂ. ನೀ ಹೆಳ್ದ್ಯಲ್ಲ ದನಕಾಯೋ ರಾಮಣ್ಣ ಅಲ್ಲೇ ಸಿಕ್ಕಿದ್ದು. ಬ್ಯಾಡ ಸ್ವಾಮಿ ಹುಲಿ ಬಾಂದತಂತೆ
ಈ ಕಾನೊಳಗ ಅಂತ ಹೇಳಿ ಅತ್ಲಗಿಂದ ದನಾಹೊಡ್ಕಂಡ್ ಹೋದ. ಇಲ್ಲೆಲ್ಲಿ ಬರ್ಬೇಕು ಬಿಡೋ ಮಾರಾಯ
ಅಂದು ತೊರಿ ದಾಟ್ಸೆ ಬಿಟ್ಟೆ. ಚ್‌ಕ್ಕಡಿ ಹೋಗ್ತಾನೇ ಇತ್ತು.ಸ್ವಲ್ಪ ದೂರ ಮೇಲೆ ಎತ್ತು ಎತ್ತೆತ್ಲಗೊ ಜಗ್ಗಾಕ್ ಶುರು
ಮಾಡಿದ್ವೂ , ಅವಕ್ಕ್ ಗೊತ್ತಾಗ್ ಹೋಗಿತ್ತು ಹತ್ರ ಎಲ್ಲೋ ಹುಲಿನೊ, ಚಿರ್‍ತೇನೋ ಐತಿ ಅಂತ. " ಮುಂದುವರೀತಿದ್ದ
ಮಾತಿಗೆ ತಡೆಯೊಡ್ದಿದ ರಂಗ " ಅವಕ್ಕ್ ಹೆಂಗ ಗೊತ್ತಾಕತೀ"
"ಈಗ ಜೊರಾಗಿ ಬರ್ತಾ ಐತಲ್ಲ ಈ ಜಿಡ್ಡು ವಾಸ್ನೆ, ಎತ್ತಿಗೆ ತುಂಬಾ ದೂರ್ದಿಂದ್ಲೇ ಗೊತ್ತಾಗ್ ಹೊಗ್ತತೀ.
ಅಷ್ಟೋತ್ತಿಗೆ ನಾನು ನನ್ನ್ ಬಂದೂಕು ತಯಾರ್ ಮಾಡ್ಕಂಡ್ ಬಿಟ್ಟೆ. ಇದ್ದಕಿದ್ದಹಂಗ ದೂರದ್ ಪೊದೆಯೊಳ್ಗ
ಸಟಸಟ ಅಂತ ಶಬ್ದ ಬಂತು, ಎತ್ತು ನಿಂತ ಬಿಟ್ವು. ಒಂದ ಕ್ಷಣದಾಗ ಪೊದೆ ಇಂದ ದೈತ್ಯ ಗಾತ್ರದ ಈ ಮೃಗ
ಹೊರಬಂತು, ನೋಡಿ ದಂಗಾಗಿ ಹೋದೆ, ಆದ್ರೂ ದೈರ್ಯ ತಗೊಂಡು ನಿಶಾನಿ ಇಟ್ಟು ಹೊಡ್ದೇ ಬಿಟ್ಟೆ..
ಈ ಸರೀನು ಗುರಿ ತಪ್ಲಿಲ್ಲ, ತಲಿ ಹೊಕ್ಕ ಆ ಗುಂಡಿಗೆ ಹುಲಿ ಒಂದೇ ಸಲ ಜೊರಾಗ್ ಗರ್ಜಿಸಿ ಮಲ್ಗೇ ಬಿಟ್ತು.
ಅದೇ ಗರ್ಜನೆ ರಾಮಣ್ಣಗೂ ಕೇಳ್ಸಿರ್ಬೆಕು ಅದನ್ನ ಅವ ಹೆಳ್ಯಾನೆ. ಅಲ್ಲಿಂದ ಮುಂದ ನಡೆದಿದ್ದೇ ದೊಡ್ಡ ರಾಮಾಯಣ.
ಎತ್ತು ಹೆದ್ರಿ ದಿಕ್ಕಾಪಾಲಾಗಿ ಒಡ್ಬಿಟ್ವು.ಅವ್ನ್ ಹಿಡ್ಕೊಂಡ್ ಬಂದು ಮರಕ್ಕೆ ಕಟ್ಟಿ ಹಾಕಿ. ಅಲ್ಲೇ ಬಿದ್ದಿದ್ದ ಈ ಪ್ರಾಣಿನ ಚಕ್ಕಡಿಗೆ ಹೇರಿ
ಮತ್ತೆ ಎತ್ತು ಕಟ್ಟದ್ರೊಳಗ ಹೆಣ ಬಿದ್ ಹೋತು. ಎಲ್ಲ ಮುಗ್ಸ್‌ಕೊಂಡು ಗಾಡಿ ಹೊಡ್ಕಂಡು ಬರ್ತಾ ಇದ್ದೆ ಎದುರಿಗೆ ನೀವ್ ಸಿಕ್ರಿ."
ಮೆಲ್ಲನೆ ಸಾಗುತ್ತಿದ್ದ ಬಂಡಿ ಊರಿನ ಅಗಸೆಗೆ ಬಂದು ಇದ್ದ ನಾಲ್ಕಾರು ಮನೆಗಳ ದಾಟಿ ಮನೆ ಸೇರಿತ್ತು.
ಮನೆ ಅಂಗಳ ದಲ್ಲಿ ಸೇರಿದ್ದ ಕೆಲವು ಮಂದಿ ನಮ್ಮನ್ನು ಸ್ವಾಗತಿಸಿದರು. ಇಹಲೋಕ ತೊರೆದಿದ್ದ ಹುಲಿರಾಯನನ್ನು ಎಲ್ಲರೂ ಸೇರಿ ಎತ್ತಿಟ್ಟು,
ಪ್ರತಿಯೊಂದು ಅಂಗಾಂಗಗಳನ್ನು ಅವ್ರ್ವರ ಧಾಟಿಯಲ್ಲಿ ವಿವರಿಸುತ್ತಿದ್ದರು. ಕೊನೆಯ ಜಾವದ ವರೆಗೂ ಅದೇ ನಡೆದಿತ್ತು.
ಬೆಳಗಾದ ಮೇಲೆ ಹೊಲೆಯ ದರ್ಮ ನಿಂದ ಮರಣೋತ್ತರ ಪರೀಕ್ಷೆ ನಡೆಸಿ, ಬಂದ ಚರ್ಮವನ್ನು ಅದ್ಯಾವುದೋ ಮಠದ ಸ್ವಾಮಿಜಿಗೆ ಅರ್ಪಿಸಿದರು, ಉಗುರು, ಕೂದಲು
ಗಳನ್ನೆಲ್ಲ ಹಂಚಿಕೊಂಡರು..."
ಅಜ್ಜಿ ತನ್ನ ಗಂಡ ಮಾಡಿದ ಬಗ್ಗನ ಬೇಟೆಯನ್ನು ಹೆಮ್ಮೆಯಿಂದ ಹೇಳುತ್ತಿದ್ದಳು. ಅವಳ ತೊಡೆಯ ಮೇಲೆ ಮಲಗಿ ಕುತೊಹಲದಿಂದ ಕೇಳುತ್ತಿದ್ದ ನಾನು ನಿದ್ರಾದೇವತೆಗೆ
ಶರಣಾಗಿದ್ದೆ...........

1 comment:

ಶಾಂತಲಾ ಭಂಡಿ (ಸನ್ನಿಧಿ) said...

ತೇಜಸ್ವಿ...
ಚಂದದ ಕಥೆಯಿದು. ಚಂದವಾಗಿ ಹೇಳಿದ್ದೀಯಾ....
ಬರೆಯುತ್ತಲಿರು.